ಅದೃಷ್ಟ ನಮ್ಮ ಕೈಯಲ್ಲಿ ಇರುವುದಿಲ್ಲ ಕೇವಲ ತೀರ್ಮಾನ ನಮ್ಮ ಕೈಯಲ್ಲಿ ಇರುತ್ತದೆ.
ನಾವು ತೆಗೆದುಕೊಳ್ಳುವ ತೀರ್ಮಾನವೇ ನಮ್ಮ ಅದೃಷ್ಟವನ್ನು ತೀರ್ಮಾನಿಸುತ್ತದೆ.
ಬೆಲೆಯಿಲ್ಲದ ಜಾಗದಲ್ಲಿ ನೆಲೆ ಕಾಣಬೇಡಿ,
ಪ್ರೀತಿ ಇಲ್ಲದ ಜಾಗದಲ್ಲಿ ಆಶ್ರಯ ಕೇಳಬೇಡಿ.
Share On
2
ಜೀವನವೂ ಬರಿ ಕಷ್ಟ ನೋವುಗಳಿಂದ ಕೂಡಿದೆ ಎಂದು ಕುಗ್ಗದಿರಿ,
ಒಂದಲ್ಲ ಒಂದು ದಿನ ನಮ್ಮ ಜೀವನದಲ್ಲೂ ಕೂಡ ಸಂತೋಷ ದಿನಗಳು ಬರಲಿದೆ ಎಂಬ ವಿಶ್ವಾಸದೊಂದಿಗೆ ಬದುಕಬೇಕು.
ನಮ್ಮ ಕಷ್ಟದ ಸಮಯದಲ್ಲಿ ಸ್ಪೊರ್ತಿ ತುಂಬುವ ಒಂದು ಜೀವ ನಮ್ಮೊಂದಿಗಿದ್ದರೆ ಅಸಾದ್ಯವೂ ಸಾದ್ಯವಾಗುತ್ತದೆ....
Share On
3
ನೀವು ಯೋಚಿಸದೆ ಹೇಳುವ ಮಾತು,
ನಿಮ್ಮನ್ನು ಒಂದೊಂದು ನಿಮಿಷ ಯೋಚಿಸುವಂತೆ ಮಾಡುತ್ತದೆ.
ಆದ್ದರಿಂದ ಯೋಚಿಸಿ ಮಾತನಾಡಿ.
ತಾಳ್ಮೆ ಎನ್ನುವುದು ಬಲಹೀನತೆಯಲ್ಲ,
ಅದೊಂದು ಶಕ್ತಿ,
ಅದು ಎಲ್ಲರ ಬಳಿ ಇರುವುದಿಲ್ಲ”
Share On
4
ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ...
ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲೂ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ.
ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಗೂ ಬದುಕುವ ಪ್ರಯತ್ನ ಮಾಡಬೇಡಿ,
ಏಕೆಂದರೆ ನಿಮ್ಮನ್ನು ಗೌರವಿಸುವವರು ನಿಮ್ಮನ್ನೇ ಹುಡುಕಿಕೊಂಡು ಬರುತ್ತಾರೆ,
ಅವರಿಗೆಂದೂ ಮೋಸ ಮಾಡದಿರಿ, ಸ್ನೇಹ, ಪ್ರೀತಿ ಕಳೆದುಕೊಳ್ಳದಿರಿ.
Share On
5
ನೆಮ್ಮದಿಯಾಗಿ ಇರಬೇಕೆಂದರೆ ನಾವು ಇನ್ನೊಬ್ಬರ ವಿಷಯಕ್ಕೆ ಕಿವಿಕೊಡದೆ,
ಮತ್ತೊಬ್ಬರು ನಮ್ಮ ಬಗ್ಗೆ ಏನೇ ಮಾತಾಡಿದರೂ ತಲೆ ಕೆಡಿಸಿಕೊಳ್ಳಬೇಡಿ.
ಸಮಾಜದಲ್ಲಿ ಒಬ್ಬ ಬಡವ ನೂರು ಸತ್ಯ ಹೇಳಿದರೂ ಯಾರು ನಂಬಲ್ಲ.....
ಆದರೆ ಅದೇ ಒಬ್ಬ ಶ್ರೀಮಂತ ಒಂದು ಸುಳ್ಳು ಹೇಳಿದರೆ ಸಾಕು ಎಲ್ಲರೂ ನಂಬುತ್ತಾರೆ....
ಹಣಕ್ಕೆ ಇರುವ ಬೆಲೆ.. ಬಡವನ ಗುಣಕ್ಕೆ ಇಲ್ಲಾ...
Share On
6
ವಿದ್ಯೆ ಇದ್ದರೇನಂತೆ ವಿವೇಕ ಇಲ್ಲದಿದ್ದರೆ,
ಹಣ ಇದ್ದರೇನಂತೆ ಗುಣ ಇಲ್ಲದಿದ್ದರೆ,
ಪ್ರಾಣ ಇದ್ದರೇನಂತೆ ತ್ರಾಣ ಇಲ್ಲದಿದ್ದರೆ,
ಗುರು ಇದ್ದರೇನಂತೆ ಅರಿವೇ ಇಲ್ಲದಿದ್ದರೆ,
ರೂಪ ಇದ್ದರೇನಂತೆ ಮಾನ ಇಲ್ಲದಿದ್ದರೆ,
ಸುಖ ಇದ್ದರೇನಂತೆ ಶಾಂತಿ ಇಲ್ಲದಿದ್ದರೆ,
ಏನಿದ್ದರೇನಂತೆ ಮಾನವೀಯತೆ ಇಲ್ಲದಿದ್ದರೆ.
Share On
7
ಮೋಸ ಮಾಡಿ ಸಂಪಾದನೆ ಮಾಡಿದ ಹಣದಲ್ಲಿ,
ಸ್ವಲ್ಪ ಹಣ ಪುಣ್ಯದ ಕಾರ್ಯಕೆ ವಿನಿಯೋಗ ಮಾಡಿದಲ್ಲಿ,
ಆ ಪುಣ್ಯದ ಫಲ ಮೋಸ ಹೋದವರಿಗೆ ಸೇರುತದೆ....
ಹೊರುತು ಮೋಸ ಮಾಡಿದವರಿಗಲ್ಲ.
....ಮೋಸ ಮಾಡಿದವರಿಗೆ ಪಾಪದ ಫಲ ಕಟ್ಟಿಟ್ಟ ಬುತ್ತಿ....
Share On
8
ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತೆ.
ಒಂದು ಸಣ್ಣ ಸುಳ್ಳು ಸ್ನೇಹವನ್ನೇ ದೂರ ಮಾಡುತ್ತೆ.
ಒಂದು ಸಣ್ಣ ಅವಮಾನ ಸಂಬಂಧಗಳನ್ನೇ ದೂರ ಮಾಡುತ್ತೆ, ಕಾರಣ ಸಣ್ಣದ್ದೇ ಇರಬಹುದು ಪರಿಣಾಮ ದೊಡ್ಡದಾಗಿರುತ್ತೆ.
Share On
9
ಜೀವನದಲ್ಲಿ ಬರುವುದೆಲ್ಲವ ಸ್ವೀಕರಿಸಬೇಕು,
ಬಂದದ್ದೆಲ್ಲವ ಅನುಭವಿಸ*ಬೇಕು,
ನಮ್ಮ ಪಾಲಿನದಷ್ಟೇ ನಮಗೆ ಸಿಗುವುದು,
ನಮ್ಮದಲ್ಲದ್ದು ನಮ್ಮಿಂದ ಖಂಡಿತಾ ದೂರಾಗುವುದು,
ಇರುವಷ್ಟು ದಿನ ನೆಮ್ಮದಿಯಾಗಿರಬೇಕು.
ಇಷ್ಟೇ ಜೀವನ.
Share On
10
ಅನುಮಾನ ಮತ್ತು ಅಹಂಕಾರ
ಇವೆರಡೂ ಭಯಂಕರವಾದ ಮಾನಸಿಕ ರೋಗಗಳು.
ಈ ರೋಗ ಬಂದವರು ತಾವು ಸಂತೋಷವಾಗಿರುವುದಿಲ್ಲ,
ಮತ್ತು ಇತರರನ್ನು ಸಂತೋಷದಿಂದ ಇರಲು ಬಿಡುವುದಿಲ್ಲ.
Share On
11
ಜೀವನದಲ್ಲಿ ಯಾರು ಯಾರಿಗೂ ಅನಿವಾರ್ಯವಲ್ಲ ಸ್ವಲ್ಪ ಜನ ನಮ್ಮನ್ನು ಇಷ್ಟಪಡುತ್ತಾರೆ.
ಇನ್ನು ಸ್ವಲ್ಪ ಜನ ಇಷ್ಟ ಪಟ್ಟಂತೆ ನಟಿಸುತ್ತಾರೆ.
ಇನ್ನು ಕೆಲವರು ಅವರ ಅವಶ್ಯಕತೆಗೆ ನಮ್ಮನ್ನು ಬಳಸಿಕೊಳ್ಳುತ್ತಾರೆ.
“ಭವಿಷ್ಯವನ್ನು ರೂಪಿಸುವುದು ಭರವಸೆಗಳೇ ಹೊರತು ಭಯಗಳಲ್ಲ,
ಭಯ ಕೇವಲ ಭ್ರಮೆಯಷ್ಟೇ.”
Share On
12
ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು,
ಹಾಗೆಯೇ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು.
“ಕಾರಿನಲ್ಲಿ ಓಡಾಡಿದರೆ ಪ್ರಪಂಚ ನಿನ್ನ ನೋಡಬಹುದು....
ಕಾಲ್ನಡಿಗೆಯಲ್ಲಿ ಓಡಾಡಿ ನೋಡು ಪ್ರಪಂಚವನ್ನೇ ನೀ ನೋಡಬಹುದು”
Share On
13
ಜ್ಞಾನವೆಂಬ ಸಂಪತ್ತು,
ತಾಳ್ಮೆಯೆಂಬ ಆಯುಧ,
ಜೊತೆಗೆ ನಗುವಿನಂಥ ಶಕ್ತಿವರ್ಧಕ ಹೊಂದಿದವರನ್ನು
ಯಶಸ್ಸು ಎಲ್ಲಾ ದಿಕ್ಕುಗಳಿಂದ ಬಂದು ಸೇರುತ್ತದೆ.
“ನೋಯಿಸಿ ಪಡೆಯುವ ಖುಷಿ ನರಕಕ್ಕೆ ಸಮಾನ,
ನೋವಿನಲ್ಲಿ ನಗಿಸಿ ಪಡೆಯುವ ಖುಷಿ ಸ್ವರ್ಗಕ್ಕೆ ಸಮಾನ”
Share On
14
ಕನಸು ನೂರಾರು ಇದ್ದರೇನು?
ಮನಸು ಒಂದೇ ಇರಲಿ,
ಯೋಚನೆ ಸಾವಿರ ಇದ್ದರೇನು?
ಗುರಿ ಒಂದೇ ಇರಲಿ,
ಸುಖ ದುಃಖ ಏನೇ ಇರಲಿ!
ಮುಖದಲ್ಲಿ ಸದಾ ನಗು ತುಂಬಿರಲಿ.
ನಮಗೆ ಎರಡು ರೀತಿಯ ಶಿಕ್ಷಣ ಬೇಕು,
ಮೊದಲನೆಯದು- ಜೀವನವನ್ನು ಹೇಗೆ ಮಾಡಬೇಕೆಂದು ಕಲಿಸುವುದು,
ಎರಡನೆಯದು- ಹೇಗೆ ಬದುಕಬೇಕೆಂದು ಕಲಿಸುವುದು.
Share On
15
ಸಂಸ್ಕಾರ ಇಲ್ಲದವನ ನಮಸ್ಕಾರದಲ್ಲಿ,
ಯಾವ ಪುರಸ್ಕಾರವು ದೊರೆಯುವುದಿಲ್ಲ.
ತಾಯಿ ಮತ್ತು ಹೆಂಡತಿಯನ್ನು ಅಳತೆ ಮೀರಿ ಪ್ರೀತಿಸಿ ಗೌರವಿಸಿ,
ಏಕೆಂದರೆ ಒಬ್ಬರು ಪ್ರಪಂಚಕ್ಕೆ ಕರೆ ತಂದವರು,
ಇನ್ನೊಬ್ಬರು ಈ ಪ್ರಪಂಚವನ್ನೇ ಮರೆತು ನಿಮ್ಮನ್ನು ನಂಬಿ ಬಂದವರು.
ಹೆಣ್ಣನ್ನು ರಕ್ಷಿಸಿ, ಹೆಣ್ಣನ್ನು ಗೌರವಿಸಿ...
Share On
16
ಉತ್ತಮ ಸ್ನೇಹಿತರು ಕನ್ನಡಿ ಮತ್ತು ನೆರಳು ಇದ್ದಂತೆ,
ಕನ್ನಡಿ ಎಂದೂ ಸುಳ್ಳು ಹೇಳಲ್ಲ,
ನೆರಳು ಎಂದಿಗೂ ಬಿಟ್ಟು ಹೋಗಲ್ಲ.
ಬಿಟ್ಟುಕೊಡಬೇಡ ಒಳ್ಳೆಯ ಸ್ನೇಹಿತರನ್ನು ,
ಮರಯಬೇಡ ನಿನ್ನ ಜೊತೆ ನಿಲ್ಲುವರನ್ನು ,
ತುಳಿಯಬೇಡ ಯರೊಬ್ಬರ ಬದುಕನ್ನು,
ಕಳೆದುಕೊಳ್ಳಬೇಡ ನಿನ್ನ ವ್ಯಕ್ತಿತ್ವವನ್ನು.
Share On
17
ಮನಸ್ಸಿನಲ್ಲಿ ಕೆಟ್ಟ ಆಲೋಚನೆ ತುಂಬಿದ್ದಾಗ,
ಒಳ್ಳೆಯದನ್ನು ಹೇಳುವವರು ಶತ್ರುಗಳಾಗಿ,
ಕೆಟ್ಟದ್ದನ್ನು ಹೇಳುವವರು ಹಿತ್ತೈಷಿಗಳಾಗಿ ಕಾಣುತ್ತಾರೆ.
Share On
18
ಸುಳ್ಳು ಹೇಳುವವನು ಸಾವಿರ ಹೇಳುತ್ತಾನೆ
ಏಕೆಂದರೆ ಅವನ ಹತ್ತಿರ ಸಾವಿರ ಕಥೆಗಳು ಇರುತ್ತವೆ.
ನಿಜ ಹೇಳುವವನು ಒಂದೇ ವಿಷಯವನ್ನು ಪದೇ ಪದೇ ಹೇಳುತ್ತಾನೆ.
ಏಕೆಂದರೆ ನಿಜ ಎನ್ನುವುದು ಒಂದು.
Share On
19
ಕಣ್ಣು ನಕ್ಕರೂ ಒದ್ದೆಯಾಗುತ್ತೆ,
ಅತ್ತರೂ ಒದ್ದೆಯಾಗುತ್ತೆ,
ಆದರೆ ನಗಸಿದವರು ನಾಲ್ಕು ದಿನ ನೆನಪಿನಲ್ಲಿರುತ್ತಾರೆ.
ನೋಯಿಸಿದವರೂ ಜೀವನಪೂರ್ತಿ ನೆನಪಿನಲ್ಲಿರುತ್ತಾರ...
Share On
20
ಯಾರನ್ನು ಅತಿಯಾಗಿ ತಿದ್ದಲು ಹೋಗಬೇಡ ಮನವೇ,
ಏಕೆಂದರೆ ಅಕ್ಷರ ತಿದ್ದಿದ್ದಷ್ಟು ಹಾಳೆಯೇ ಹರಿದು ಹೋಗುವದು.
ಸಂತೋಷ ಬೇರೆಯವರಿಗಾಗಿ ಇರುತ್ತದೆ ಏಕೆಂದರೆ ಅದನ್ನು ಹಂಚಿಕೊಳ್ಳುತ್ತೇವೆ,
ಆದರೆ ನೋವು ನಮ್ಮ ಸ್ವಂತದ್ದಾಗಿರುತ್ತದೆ ಏಕೆಂದರೆ ಅದನ್ನು ಎದೆಯಲ್ಲಿ ಮುಚ್ಚಿಟ್ಟುಕೊಳ್ಳುತ್ತೇವೆ.
Share On
21
ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿ ಬೇಕೋ ಹಾಗೆಯೇ,
ನಮ್ಮ ಬಾಯಿಂದ ಹೊರ ಬರುವ ಮಾತುಗಳು ಅಷ್ಟೇ ಶುದ್ಧ ವಾಗಿರಬೇಕು, ಆಗ ಸ್ನೇಹ ಸಂಬಂಧಗಳು ಶುದ್ಧವಾಗಿರುತ್ತದೆ.
ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗು ಪ್ರತಿಫಲದ ಬಗ್ಗೆ ಯೋಚನೆ ಮಾಡಬೇಡ....
ನೀನು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸತ್ಯ ಇದ್ದರೆ ಪ್ರತಿಫಲ ತಾನಾಗಿಯೇ ಒಲಿದು ಬರುತ್ತದೆ....!!!!!!!
Share On
22
ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು !!
ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು !
Share On
23
ಕನಸಿಗೂ-ನನಸಿಗೂ ಒಂದೇ ವ್ಯತ್ಯಾಸ,
ಕನಸು ಕಾಣಲು ಶ್ರಮವಿಲ್ಲದ ನಿದ್ದೆ ಬೇಕು,
ನನಸು ಮಾಡಲು ನಿದ್ದೆಯಿಲ್ಲದ ಶ್ರಮ ಬೇಕು.
Share On
24
ನಮ್ಮ ಮನಸ್ಸು ಸ್ವಲ್ಪ ಪೆಟ್ಟು ಬಿದ್ದರೂ ಒಡೆಯುವ ಗಾಜಿನಂತೆ ಇಟ್ಟು ಕೊಳ್ಳಬಾರದು.
ಅದು ಕಚ್ಛಾ ಜೇಡಿ ಮಣ್ಣಿನಂತೆ ಇಟ್ಟುಕೊಳ್ಳಬೇಕು,
ಆಗ ಜೀವನದ ಪ್ರತೀ ಹೊಡೆತಕ್ಕೂ ಅದು ಆಕಾರ ಪಡೆಯುತ್ತಾ ಹೋಗುತ್ತದೆ.
Share On
25
ಜೀವನದಲ್ಲಿ ಆಸೆ ಪಡುವುದು ತಪ್ಪಲ್ಲ ನಮ್ಮ ಯೋಗ್ಯತೆಗೆ ತಕ್ಕಂತೆ ಆಸೆ ಪಡಬೇಕು ಅಷ್ಟೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ,
ಹಾಗೆಯೇ ಮನುಷ್ಯನಿಗೆ ನಂಬಿಕೆಯು ಕೂಡ ಅಷ್ಟೇ ಮುಖ್ಯ.
ಬೇರು ಇಲ್ಲವಾದರೆ ಮರ ಉಳಿಯುವುದಿಲ್ಲ,
ನಂಬಿಕೆ ಇಲ್ಲವಾದರೆ ಸಂಬಂಧಗಳು ಉಳಿಯುವುದಿಲ್ಲ,.
Share On
26
ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ.
ಬಡತನದಲ್ಲಿ ಬೆಂದ ಹೆಣ್ಣು ಮಗಳು ತುಂಬಾ ಸ್ವಾಭಿಮಾನಿಯಾಗಿ ಬೆಳೆಯುತ್ತಾಳೆ.
ಜೀವನವನ್ನು ಎಂದು ಹಗುರವಾಗಿ ಪರಿಗಣಿಸುವುದಿಲ್ಲ ...
ಎಂಥ ಕಠಿಣ ಪರಿಸ್ಥಿತಿಯಲ್ಲೂ ಕುಗ್ಗದೆ ಎದುರಿಸಿ ನಿಲ್ಲುತ್ತಾಳೆ ಪ್ರತಿ ಪೈಸೆಗೂ ಬೆವರಿನ ಬೆಲೆ ಕಟ್ಟುತ್ತಾಳೆ...
Share On
27
ಮಾಡುವ ಪ್ರತಿ ಪಾಪವು ಸಾಲವಿದ್ದಂತೆ ಎಂದೋ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು.
ಮಾಡುವ ಪ್ರತಿ ಒಳ್ಳೆಯ ಕೆಲಸ ಉಳಿತಾಯ ಖಾತೆಯಲ್ಲಿ ಜಮೆ ಮಾಡಿದಂತೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ.
“ದಾರಿ ತಪ್ಪಿದರೂ ಬಾಯಿ ತಪ್ಪಬಾರದು.
ದಾರಿ ತಪ್ಪಿದರೆ ವಾಪಸ್ ಬಂದು ಸರಿ ದಾರಿಯಲ್ಲಿ ಹೋಗಬಹುದು.
ಬಾಯಿ ತಪ್ಪಿ ವಚನ ಭ್ರಷ್ಟರಾದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ”.
Share On
28
ತಪ್ಪು ಮಾಡುವ ಸಂದರ್ಭ ದಿನಾಲೂ ಬರುತ್ತದೆ,
ಆದರೆ ಒಳ್ಳೆಯದನ್ನು ಮಾಡುವ ಅವಕಾಶ ಒಮ್ಮೊಮ್ಮೆ ಬರುತ್ತದೆ ಆ ಅವಕಾಶವನ್ನು ಕಳೆದುಕೊಳ್ಳಬಾರದು.
“ಎಲ್ಲಾರ ಜೀವನದಲ್ಲೂ ಒಬ್ಬ ಮನುಷ್ಯ ಸಿಗೋದು ಸಹಜ ಆದ್ರೆ,
ಮನುಷ್ಯತ್ವ ಇರೋ ಮನುಷ್ಯ ಸಿಗೋದು ತುಂಬಾ ತುಂಬಾ ಕಷ್ಟ”.
Share On
29
ನಿಯತ್ತಾಗಿ ಇರುವವರು ಯಾವಾಗಲೂ ಗರ್ವದಿಂದ ಇರುತ್ತಾರೆ.
ಅವರಿಗೆ ನಟಿಸಲು ಬರುವುದಿಲ್ಲ.
ಅವರು ಯಾರ ಮುಂದೆಯೂ ತಲೆಭಾಗಿಸಲು ಬಯಸುವುದಿಲ್ಲ.
ಈ ಸ್ವಭಾವದಿಂದ ಅವರು ಎಲ್ಲರ ಕಣ್ಣಿನಲ್ಲಿ ಕೆಟ್ಟವರಾಗಿರುತ್ತಾರೆ
“ನಮ್ಮದೇ ಆದ ಒಂದು ನಿರ್ಧಾರ ಇರಬೇಕು ಅದುವೇ ಜೀವನ”.
Share On
30
ಖುಷಿ ಅನ್ನೋದು ಒಂದು ಸೂರ್ಯನ ಪ್ರತಿಬಿಂಬ ಇದ್ದಂಗೆ,
ಕೆಲವೊಂದು ಸನ್ನಿವೇಶ ಮೋಡ ಕವಿದಂಗೆ ಆಗುತ್ತೆ,
ಆದರೆ ಯಾವತ್ತೂ ಯಾರಿಗೂ ತೊಂದರೆ ಕೊಡಲ್ಲ.
ಅದೇ ತರ ನಮ್ಮ ಜೀವನ ಆಗಿರಬೇಕು.
ಕಷ್ಟಗಳು ಎದುರಾಗುವದು ನಮ್ಮ ದೌರ್ಬಲ್ಯವನ್ನು ಪ್ರದರ್ಶಿಸುವದಕಲ್ಲ,
ನಮ್ಮ ಸಾಮರ್ಥ್ಯವನ್ನು ಪರೀಕ್ಷೇ ಮಾಡುವದಕ್ಕೆ.
Share On
31
ಹೂ ಎಂದಿಗೂ ಎರಡು ಬಾರಿ ಅರಳುವುದಿಲ್ಲ ಈ ಜನ್ಮ ಮತ್ತೆ ಮತ್ತೆ ಬರುವುದಿಲ್ಲ.
ಜೀವನದಲ್ಲಿ ಸಾವಿರಾರು ಜನರು ಸಿಕ್ಕರೂ ಮನಸ್ಸಿಗೆ ಎಲ್ಲರೂ ಇಷ್ಟವಾಗುವುದಿಲ್ಲ,
ಇಷ್ಟ ಆದವರನ್ನು ಒಮ್ಮೆ ಕಳೆದುಕೊಂಡರೆ,
ಅಂತವರು ಮತ್ತೆ ಮತ್ತೆ ಸಿಗುವುದಿಲ್ಲ.
Share On
32
ಹೂವಿನಹಾರ ಎಲ್ಲರಿಗೂ ಕಾಣಿಸುತ್ತದೆ.
ಆದರೆ,
ಅದರ ಒಳಗಿರುವ ದಾರ ಯಾರ ಕಣ್ಣಿಗೂ ಕಾಣಿಸುವುದಿಲ್ಲ;
ಹಾಗೆಯೇ,
ನಮ್ಮ ಚಿಕ್ಕ ತಪ್ಪುಗಳು ಎಲ್ಲರ ಕಣ್ಣಿಗೂ ಕಾಣಿಸುತ್ತದೆ.
ಆದರೆ,
ನಮ್ಮೊಳಗೆ ಇರುವ ಒಳ್ಳೆಯತನ ಯಾರಿಗೂ ಕಾಣುವುದಿಲ್ಲ.
ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನವಲ್ಲ,
ಸಮಸ್ಯೆಗಳೊಂದಿಗೆ ಬದುಕುವುದೇ ನಿಜವಾದ ಜೀವನ.
Share On
33
ಅವಕಾಶ ಸಿಕ್ಕಿದೆ ಎಂದು ಯಾರಿಗೂ ಅವಮಾನ ಮಾಡಬೇಡಿ,
ಸಮಯ ಒಂದೇ ರೀತಿ ಇರುವುದಿಲ್ಲ,
ಸಮಯವು ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ.
ಕೆಳಗೆ ಬಿದ್ದವನು ಮೇಲೆಳಲೇ ಬೇಕು.
ಪರಸ್ಥಿತಿ ಏನೇ ಇರಲಿ,
ಮುಖದಲ್ಲಿ ಒಂದು ಸಣ್ಣ ನಗುವಿರಲಿ.
Share On
34
ಮಾತಿನಿಂದ ನೋಯಿಸಿದವರನ್ನು ನೀವು ಲೆಕ್ಕಕ್ಕೆ ಇಟ್ಟುಕೊಳ್ಳಬೇಡಿ,
ನಿಮ್ಮ ನೋವಿಗೆ ಧೈರ್ಯ ತುಂಬಿ ನಿಮ್ಮ ಜೊತೆ ಇರುವವರನ್ನು ನೀವು ಜೀವನ ಪೂರ್ತಿ ನಂಬಿ.
ಪ್ರತಿಭೆ ಮತ್ತು ರೂಪ ದೇವರ ಕೊಡುಗೆ.
ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ.
ವ್ಯಕ್ತಿತ್ವ ಮತ್ತು ಅಹಂಕಾರ ನಾವೇ ರೂಪಿಸಿಕೊಂಡಿದ್ದು.
ಆಲೋಚಿಸಿ ಮುಂದೆ ನಡಿಯಿರಿ.
Share On
35
ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ,
ಕೇವಲ ಒಂದು ಹೆಜ್ಜೆ ಹಿಂದೆ ಇಟ್ಟು ಕಾದು ನೋಡು ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು,
ಕ್ರಮೇಣ ತಮ್ಮನು ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ,
ನೀನು ಅದೃಷ್ಟಶಾಲಿಯಾದರೆ ಅದನ್ನೆಲ್ಲ ನೀನು ನೋಡುವೆ.
Share On
36
ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದು ಅಂತ ಭಾವಿಸಬಾರದು,
ರಾತ್ರಿ ಕಳೆದು ಬೆಳಕು ಮೂಡುವ ರೀತಿಯಲ್ಲಿ ಒಳ್ಳೆಯ ದಿನಗಳು ಬಂದೆ ಬರುತ್ತವೆ,
ತಾಳ್ಮೆ ಆತ್ಮ ವಿಶ್ವಾಸ ನಂಬಿಕೆ ಜೊತೆ ಇರಬೇಕು ಅಷ್ಟೇ.
Share On
37
ಮನೆಗಿಂತ ಬಾಗಿಲು ಚಿಕ್ಕದು,
ಬಾಗಿಲಿಗಿಂತ ಬೀಗ ಚಿಕ್ಕದು,
ಬೀಗಕ್ಕಿಂತ ಬೀಗದ ಕೀ ಚಿಕ್ಕದು,
ಹೇಗೆ ಬೀಗದ ಕೀ ಯಿಂದ ದೊಡ್ಡ ಮನೆಯನ್ನು ಪ್ರವೇಶಿಸ ಬಲ್ಲೆವೊ,
ಅದೇ ರೀತಿ ಒಂದು ಸಣ್ಣ,ಉತ್ತಮ ಆಲೋಚನೆಯಿಂದ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು
Share On
38
✍️ಎಷ್ಟೆ ಕಷ್ಟಗಳಿರಲಿ ನಂಬಿಕೆ ಮಾತ್ರ ಕಳೆದುಕೊಳ್ಳಬೇಡಿ,
ನಿಮ್ಮ ಸಹನೆ ನಿಮ್ಮ ಜೀವನಕ್ಕೆ ಒಳ್ಳೆಯ ದಾರಿ ಹುಡುಕಿಕೊಡುತ್ತದೆ.
ಎಲ್ಲ ಕಷ್ಟಗಳೆಂಬ ಕತ್ತಲೆಯ ಹಿಂದೆ ಸುಖದ ಬೆಳಕು ಇದ್ದೆ ಇರುತ್ತದೆ.
ಸಮಾಧಾನದಿಂದ ಹುಡುಕುವ ಪ್ರಯತ್ನ ಮಾಡಿ.
ಈ ಜೀವನ ಸಹನೆಯ ಜೊತೆಗೆ ಸಾಗಲೇಬೇಕು.
ದೇವರು ಎಲ್ಲವನ್ನೂ ಕೊಟ್ಟಿದ್ದಾನೆ.✍️
Share On
39
ಒಂಟಿತನ ಅಂದ್ರೆ ಯಾರು ಇಲ್ಲದೇ ಇರೋದಲ್ಲ,
ಎಲ್ಲರೂ ಇದ್ದರೂ ಯಾರೂ ಅರ್ಥ ಮಾಡಿಕೊಳ್ಳದೇ ಇರೋದೇ ನಿಜವಾದ ಒಂಟಿತನ.
ಸಂಬಂಧಗಳು, ಜೀವಕ್ಕಿಂತ ಮುಖ್ಯ.
ಸಂಬಂಧಗಳಲ್ಲಿ,
ಜೀವವಿರುವುದು ಅದಕ್ಕಿಂತಲೂ ಮುಖ್ಯ.
Share On
40
ಯಾವುದೇ ಕೆಲಸ ಮಾಡಲು ಬೇಕಾಗಿರುವುದು ಬರೀ ಕೌಶಲ್ಯವಲ್ಲ.
ಮಾಡಬೇಕು ಎಂಬ ಹಂಬಲ, ಮಾಡಿಯೇ ತೀರುವ ಮನೋಬಲ.
ಜೀವನ ಇರುವವರಿಗೂ ಕಲಿಯುತ್ತಲೇ ಇರಿ.
ಏಕಂದರೆ
ಅನುಭವಕ್ಕಿಂತ ಉತ್ತಮ ಶಿಕ್ಷಣ ಮತ್ತೊಂದಿಲ್ಲ.
Share On
41
ಮನುಷ್ಯ ಎತ್ತರಕ್ಕೆ ಬೆಳೆದಂತೆ
ಬಾಗುವುದನ್ನು ಕಲಿಯಬೇಕು,
ಆಗಲೇ ಬದುಕು ಸುಂದರ.
Share On
42
ಯಾವುದೇ ಫಲಾಪೇಕ್ಷೆಯಿಲ್ಲದೆ,
ಎಲ್ಲರಿಗೂ ಒಳ್ಳೆಯದನ್ನೇ ಬಯಸಿ,
ಸಾಧ್ಯವಾದಷ್ಟು ಒಳ್ಳೆಯನ್ನೆ ಮಾಡಿ,
ಏಕೆಂದರೆ ಹೂ ಮಾರುವವರ ಕೈಯಲ್ಲಿ
ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ.
Share On
43
ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ,
ಕೆಟ್ಟವರಲ್ಲೂ ಒಳ್ಳೆಯ ತನವನ್ನು ಕಾಣಬಹುದು.
ಆದರೆ,
ಕೆಟ್ಟ ಮನಸ್ಸಿನಿಂದ ಯೋಚಿಸಿದರೆ,
ಒಳ್ಳಯವರಲ್ಲೂ ಕೆಟ್ಟದ್ದೇ ಕಾಣಿಸುತ್ತದೆ.
Share On
44
ಅತಿಯಾಗಿ ನೋವು ಅನುಭವಿಸಿದ ವ್ಯಕ್ತಿ ಯಾರೊಂದಿಗೂ ಬೆರೆಯುವುದಿಲ್ಲ.
ಅತಿಯಾಗಿ ನಗುವ ವ್ಯಕ್ತಿ ಯಾರೊಂದಿಗೂ ನೋವನ್ನು ಹಂಚಿಕೊಳ್ಳುವುದಿಲ್ಲ.
Share On
45
ಸಮಯ ಒಳ್ಳೆದೇ ಆಗಲಿ
ಕೆಟ್ಟದೆ ಆಗಲಿ
ಒಂದು ಪಾಠವನ್ನು ಕಲಿಸೇ ಕಲಿಸುತ್ತದೆ.
ಒಳ್ಳೆ ಸಮಯದಲ್ಲಿ ಎಲ್ಲರೂ ನಮ್ಮವರಾಗಿ,
ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ ಬದಲಾಗುತ್ತಾರೆ.
Share On
46
ಮದ್ಯಪಾನ ಮಾಡುವವನು ಕೇವಲ ಮದ್ಯವನ್ನು ಕುಡಿಯುವುದಿಲ್ಲ,
ಅವನು ತನ್ನ ತಾಯಿಯ ಸಂತೋಷ,
ಅವನ ಹೆಂಡತಿಯ ಶಾಂತಿ,
ಅವನ ಮಕ್ಕಳ ಕನಸು,
ಅವನು ತನ್ನ ತಂದೆಯ ಖ್ಯಾತಿಯನ್ನು ಒಂದೇ ಗುಟುಕಿನಲ್ಲಿ ಕುಡಿಯುತ್ತಾನೆ.
Share On
47
ಶರೀರಕ್ಕೆ ಸೇರಿದ ವಿಷದಿಂದಾಗಿ,
ಒಬ್ಬ ವ್ಯಕ್ತಿ ಒಂದೇ ಸಾರಿ ಸಾಯುವನು.
ಆದರೆ,
ಕಿವಿಗೆ ಸೇರಿದ ಚಿಕ್ಕ ಚಿಕ್ಕ ವಿಷ ವಿಷಯಗಳನ್ನು ಮನಸಿನಲ್ಲಿಟ್ಟುಕೊಳ್ಳುವುದರಿಂದ,
ದೊಡ್ಡ ದೊಡ್ಡ ಸಂಬಂಧಗಳು ದುರ್ಬಲಗೊಳ್ಳುವುದಲ್ಲದೆ,
ಸಂಬಂಧಗಳನ್ನು ತೊರೆಯಲು ಆಗದೆ ನಿಭಾಯಿಸಲು ಸಾಧ್ಯವಾಗದೆ ವ್ಯಕ್ತಿ ಕ್ಷಣ ಕ್ಷಣಕ್ಕು ಸಾಯುತ್ತಾನೆ.
Share On
48
ಒಬ್ಬರ ಸರಳ ಸ್ವಭಾವ ಅವರ ಬಲಹೀನತೆ ಅಲ್ಲ,
ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ,
ಆದರೆ ಅದರ ರಭಸಕ್ಕೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ.
Share On
49
ಯಾವ ವ್ಯಕ್ತಿ ಸತ್ಯ, ನೀತಿ, ಪ್ರೀತಿ, ದಯೆ, ಕರುಣೆ, ತ್ಯಾಗ ಮತ್ತು ಸಂಯಮದ ಹಾದಿಯಲ್ಲಿ ನಡೆಯುತ್ತಾನೋ ಅವನು ಮಾತ್ರ ನೆಮ್ಮದಿಯ ಜೀವನ ನಡೆಸಬಹುದು.
ಮೋಸ, ವಂಚನೆ, ಕಪಟ, ಸ್ವಾರ್ಥ, ಮದಮಸ್ಸರ, ಅತೀ-ಕಾಮಿಸ್ಟ ಮತ್ತು ಅಂಹಕಾರದ ಹಾದಿಯಲ್ಲಿ ನಡೆಯುವವನಿಂದ ಸಾಧ್ಯವಿಲ್ಲ.
Share On
50
ಕಣ್ಣು ತೆರೆದರೆ ಜನನ,
ಕಣ್ಣು ಮುಚ್ಚಿದರೆ ಮರಣ,
ಜನನ ಮರಣಗಳ ನಡುವೆ,
ರೆಪ್ಪೆ ಆಡಿಸುತ್ತಿರುವುದೇ ಜೀವನ.
Share On
51
ಜೀವನದಲ್ಲಿ ಎಲ್ಲರಿಗೂ ಹಿನ್ನಡೆಯ
ದಿನಗಳು ಇರುತ್ತವೆ.
ಹಿನ್ನಡೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.
ಜಗತ್ತಿಗೆ ಬೆಳಕು ಚೆಲ್ಲುವ ಸೂರ್ಯ ಚಂದ್ರರಿಗೂ ಗ್ರಹಣ ಹಿಡಿಯುತ್ತದೆ.
ಕತ್ತಲು ಕವಿಯುತ್ತದೆ.
ಗ್ರಹಣ ಬಿಟ್ಟ ನಂತರ ಸೂರ್ಯ ಚಂದ್ರ ಮತ್ತೆ ಪ್ರಜ್ಜಲಿಸುತ್ತಾರೆ ಅಂತೇ ನಮ್ಮ ಜೀವನ.
Share On
52
ಕತ್ತಲು ಕತ್ತಲೆಯನ್ನು ಎಂದು ಓಡಿಸಲಾಗದು
ಅದಕ್ಕೆ ಬೆಳಕು ಬೇಕು.
Share On
53
ಸಂಬಂಧಗಳು ದೀಪದ ಎಣ್ಣೆಯಂತಿರಬೇಕು,
ಯಾರು ಎಷ್ಟೇ
ಬತ್ತಿಯಿಟ್ಟರೂ ಅದು ಬೆಳಗುತ್ತಿರಬೇಕು.
Share On
54
ನಾನು ಎಂಬುದ ಮರೆತು
ನನ್ನಿಂದಲೇ ಎಂಬುದ ತೊರೆದು,
ನಾವು ಎಂಬುದ ನೆನೆದು
ನಮ್ಮಿಂದ ಎಂಬುದ ಮನಸಿಟ್ಟು,
ಎಲ್ಲರೊಳಗೊಂದಾಗಿ ಬದುಕಿದರೆ
ಅವನೇ ನಿಜವಾದ ಸಾಧಕ.
ಅದುವೇ ಬದುಕಿನ ಸಾದನೆ.
Share On
55
ಮನಸ್ಸಿಟ್ಟು ಕಲಿತ ಅಕ್ಷರ,
ಮೈ ಬಗ್ಗಿಸಿ ದುಡಿದು ತಿನ್ನುವ ಅನ್ನ,
ಕಷ್ಟ ಪಟ್ಟು ಗಳಿಸಿದ ಸಂಪಾದನೆ,
ಯಾವತ್ತೂ ಯಾರನ್ನು ಕೈ ಬಿಡುವುದಿಲ್ಲ.
Share On
56
ನಮಗೆ ಎಷ್ಟೇ ಜ್ಞಾನವಿದ್ದರೂ,
ಕೆಲವೊಮ್ಮೆ ನಮ್ಮ ಲೆಕ್ಕಚಾರಗಳು ತಪ್ಪಿಬಿಡುತ್ತದೆ.
ಯಾಕೆಂದರೆ ನಾವು ಕೂಡಿಸಿ ಗುಣಿಸುವಷ್ಟರಲ್ಲಿ,
ಮೇಲಿರುವವನು ನಮ್ಮನ್ನೇ ಬಾಗಿಸಿ ಕಳೆದಿರುತ್ತಾನೆ.
Share On
57
ಬಹಳ ಒಳ್ಳೆಯವನಾದ್ರೆ
ಹೆಚ್ಚು ಜನ ನಿನ್ನ ಪ್ರೀತಿಸ್ತಾರೆ ಅಂಡ್ಕೊಬೇಡ,
ಹೆಚ್ಚು ಜನ ನಿನ್ನ ಬಳಸಿಕೊಳ್ತಾರೆ.
ಅಷ್ಟೇ.
Share On
58
ಪ್ರಪಂಚದಲ್ಲಿ ಯಾವುದೇ ವಸ್ತು ಎಷ್ಟೇ ದುಬಾರಿ ಆಗಿರಬಹುದು..
ಆದರೆ ನಿದ್ರೆ, ನೆಮ್ಮದಿ ಹಾಗೂ ಸಂತೋಷಕ್ಕೆ ಇರುವಷ್ಟು ಬೆಲೆ ಯಾವ ವಸ್ತುವಿಗೂ ಇಲ್ಲ.
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ...!!
ಪ್ರತಿಯಬ್ಬರಲ್ಲೂ ಒಂದಲ್ಲಾ ಒಂದು ಕೊರತೆ ಇರುತ್ತದೆ...!!
ದಿನದಿಂದ ದಿನಕ್ಕೆ ಪರಿಪೂರ್ಣತೆಯ ಕಡೆಗೆ ಸಾಗುವುದೇ ಜೀವನ.
ಸಾಗರದಷ್ಟು ಸಂಕಷ್ಟಗಳ ನಡುವೆಯೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ.
Share On
61
ಅದೃಷ್ಟದ ಬಗ್ಗೆ ಗೊತ್ತಿಲ್ಲ...
ಆದರೆ ಕಷ್ಟಪಡುವವರಿಗೆ ಅವಕಾಶಗಳು ಖಂಡಿತವಾಗಿಯೂ ಸಿಗುತ್ತದೆ.
ಅನುಭವ ಎನ್ನುವುದು ವಯಸ್ಸಿನಿಂದ ಬರುವುದಿಲ್ಲ ಅದು ಸಮಯ ಸಂದರ್ಭ ಪರಿಸ್ಥಿತಿಯನ್ನು ಎದುರಿಸುವುದರಿಂದ ಬರುತ್ತದೆ.
Share On
62
ಒಳ್ಳೆಯ ಮನಸ್ಸು ಇರೋರಿಗೆ ದುಃಖ ಜಾಸ್ತಿ.
ಕನಿಕರ ಇರೋರಿಗೆ ಕಷ್ಟಗಳು ಜಾಸ್ತಿ.
ಕಷ್ಟದ ಸಮಯದಲ್ಲಿ ದೇವರು ಏಕೆ ಸುಮ್ಮನಿದ್ದಾನೆ ಎಂದು ಚಿಂತಿಸಬೇಡಿ
ಏಕೆಂದರೆ ಪಾಠ ಕಲಿಸಿದ ಶಿಕ್ಷಕರು ಕೂಡ ಪರೀಕ್ಷಾ ಕೊಠಡಿಯಲ್ಲಿ ಸುಮ್ಮನೆ ಇರುತ್ತಾರೆ.
Share On
63
ನಂಬಿ ಬದುಕುವುದು ಬೇರೆ,
ನಂಬಿಸುತ್ತಾ ಬದುಕುವುದು ಬೇರೆ,
ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತದೆ,
ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತದೆ.
Share On
64
ಜ್ಞಾನವೆಂಬ ಸಂಪತ್ತು,
ತಾಳ್ಮೆಯೆಂಬ ಆಯುಧ,
ಜತೆಗೆ ನಗುವಿನಂಥ ಶಕ್ತಿವರ್ಧಕ ಹೊಂದಿದವರನ್ನು
ಯಶಸ್ಸು ಎಲ್ಲಾ ದಿಕ್ಕುಗಳಿಂದ ಬಂದು ಸೇರುತ್ತದೆ.
Share On
65
ಸಿಗದವರನ್ನು ಹುಡುಕಬೇಡಿ,
ಸಿಕ್ಕಿದವರನ್ನು ಬಿಡಬೇಡಿ,
ಬರದವರನ್ನು ಕಾಯಬೇಡಿ,
ಏನನ್ನು ಕೊಡದೆ ಇರುವವರನ್ನು ಕೇಳಬೇಡಿ,
ಕೊಟ್ಟವರನ್ನು ಜೀವನದಲ್ಲಿ ಮರೆಯಬೇಡಿ.
Share On
66
ಸಿಕ್ಕಿದ್ದನ್ನು ಪಡೆದು ತೃಪ್ತಿಯಿಂದ ಬಾಳಬೇಕು,
ಸಿಗದಿದ್ದನ್ನು ಮರೆತು ಖುಷಿಯಿಂದ ಬದುಕಬೇಕು,
ಇಂದು ಸಿಕ್ಕಿದ್ದು ನಾಳೆ ಕೈ ಜಾರಿ ಹೋಗಬಹುದು,
ಇಂದು ಸಿಗದಿದ್ದು ನಾಳೆ ಒಲಿಯಬಹುದು,
ಯೋಗ ವಿದ್ದಂತೆ ಭೋಗವಿರುತ್ತದೆ.
Share On
67
ನಾವು ಒಬ್ಬರ ಬಗ್ಗೆ ಒಬ್ಬರು ಮಾತನಾಡುವುದಕ್ಕಿಂತ,
ಒಬ್ಬರಿಗೊಬ್ಬರು ಮಾತನಾಡಿ ಕೊಂಡರೆ
ನಮ್ಮ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದು.
Share On
68
ಬಡತನ ಮನುಷ್ಯನಿಗಿರಬೇಕು,
ಮನಸ್ಸಿಗೆ ಇರಬಾರದು.
ಅದೇ ಶ್ರೀಮಂತಿಕೆ ಮನಸ್ಸಿಗೆ ಇರಬೇಕು,
ಮನುಷ್ಯನಿಗೆ ಇರಬಾರದು.
Share On
69
ಪ್ರತಿ 24 ಗಂಟೆಗೆ ದಿನ ಬದಲಾದರೇ 365 ದಿನಕ್ಕೊಮ್ಮೆ ವರುಷ ಬದಲಾಗುತ್ತೇ
ಆದರೇ ಮನುಷ್ಯರು ಮಾತ್ರ ಅವಶ್ಯಕತೆಗೆ ತಕ್ಕಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತಾರೆ.
Share On
70
ಪ್ರಪಂಚದಲ್ಲಿ ಪದಗಳು ಉಚಿತವಾಗಿಯೇ ಸಿಗುತ್ತವೆ.
ಆದರೆ ಅವುಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಮೌಲ್ಯ ನಿರ್ಧಾರವಾಗುತ್ತದೆ.
Share On
71
ಸಂಪಾದನೆ ಎಂದರೆ ಕೇವಲ ಹಣವನ್ನು ಮಾತ್ರ ಸಂಪಾದಿಸುವುದಲ್ಲ.
ಅನುಭವ, ಸಂಬಂಧ, ಗೌರವ, ಪ್ರೀತಿ ವಾತ್ಸಲ್ಯ ಇವೂ ಕೂಡ ಒಂದು ರೀತಿಯ ಸಂಪಾದನೆಯೇ...!ಆಗಿವೆ,
ಹಣದ ಜೊತೆಗೆ ಇವು ಕೂಡ ತುಂಬಾನೇ ಮೌಲ್ಯಯುತವಾದ ಸಂಪಾದನೆಯಾಗಿದೆ.
Share On
72
ಖುಷಿ ಸಂತೋಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ ಅದು ಎಂದಿಗೂ ಬರಿದಾಗುವುದಿಲ್ಲ,
ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ ಮೂಲಕ ಇನ್ನೊಬ್ಬರ ಮೊಗದಲ್ಲಿ ಆ ಸಂತಸವನ್ನು ಕಾಣಬಹುದು.
Share On
73
ಎಷ್ಟು ತಾಳ್ಮೆಯಿಂದ ಇರುತ್ತೀವೋ ಅಷ್ಟು ಅಗ್ರಸ್ಥಾನ,
ಎಷ್ಟು ದೂರ ಇರುತ್ತೀವೋ ಅಷ್ಟು ಗೌರವ,
ಎಷ್ಟು ಕಡಿಮೆ ಆಸೆ ಪಡುತ್ತೀವೋ ಅಷ್ಟು ಪ್ರಶಾಂತತೆ,
ಎಷ್ಟು ಕಡಿಮೆ ಮಾತನಾಡುತ್ತೀವೋ ಅಷ್ಟು ಬೆಲೆ.
Share On
74
ಸುರಿದು ಹೋದ ಮಳೆ,
ಸರಿದು ಹೋದ ವೇಳೆ ಮತ್ತೆ ಸಿಗಲಾರದು,
ಹಾಗೆಂದು ಅದರೊಳಗೆ ನಾವುಗಳು ಕಳೆದು ಹೋಗಲಾರೆವು.
ಕೈ ಒಳಗಿರುವ ಕೈಗೆ ಸಿಗಲಾರದ ನಾಳೆಗಳ ಚಿಂತೆ ಬೇಡ, ಕಣ್ಣೆದುರಿಗಿರುವ ಈ ಕ್ಷಣಗಳಲ್ಲಿ ಬದುಕುವ ಸೊಗಸು ನಮ್ಮೊಳಗಿರಲ.
Share On
75
ತಪ್ಪುಗಳು, ಸೋಲುಗಳು, ಅವಮಾನಗಳು, ತಿರಸ್ಕಾರಗಳು
ಇವುಗಳೆಲ್ಲವೂ ಉನ್ನತಿ ಮತ್ತು ಬೆಳವಣಿಗೆಯ ಭಾಗಗಳು.
ಯಾವ ವ್ಯಕ್ತಿಯೂ ಈ ಅನುಭವಗಳಿಂದ ಹಾದು ಹೋಗದೆ ಜೀವನದಲ್ಲಿ ಗೌರವದ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
Share On
76
ಬದುಕೆಂಬುದು ಚಿತ್ರವೊಂದರ ರೇಖೇಗಳಂತೆ
ಚಿತ್ರಕಾರನ ಕೖಯ್ಯಲ್ಲಿ ಅಳಿಸುವ ರಬ್ಬರ್ ಇರುತ್ತದೆ
ಆದರೆ
ಬದುಕಿನ ಚಿತ್ರಕಾರನ ಬಳಿ ಅದಿರುವುದಿಲ್ಲ
ಆದರೆ
ಯೋಚಿಸಿ ಕೆಲಸಮಾಡಬಹುದು!
Share On
77
ಅತಿಯಾಗಿ ಚಿಂತಿಸದಿರು,
ಇನ್ನೊಬ್ಬರ ಬಾಳ ಪುಸ್ತಕದಲ್ಲಿ ನೀನೊಂದು ಅದ್ಯಾಯವಷ್ಟೇ,
ಅರ್ಥವಾದರೂ ಆಗದೆ ಇದ್ದರೂ ,
ಇಷ್ಟವಾದರೂ ಆಗದೆ ಇದ್ದರೂ ಪುಟವನ್ನು ತಿರುಗಿಸಿಯೇ ತಿರುಗಿಸುವರ
Share On
78
ಉತ್ತಮವಾದ ಬದುಕು ಸಿಗುವುದು ಅಪರೂಪ,
ಸಿಕ್ಕ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವುದು ಇನ್ನೂ ಕಠಿಣ....
ಕಷ್ಟವಾಗಲಿ ಸುಖ ವಿರಲಿ,
ಇದ್ದ ಬದುಕನ್ನು ಪ್ರೀತಿಸೋಣ.
Share On
79
ಎತ್ತರಕ್ಕೆ ಏರಬಯಸುವ ವ್ಯಕ್ತಿ ಯಾವಾಗಲು
ಏಣಿ ಕಟ್ಟುವ ಕಾರ್ಯದಲ್ಲಿ ನಿರತನಾಗಿರುತ್ತಾನೆ ವಿನಃ,
ಇನ್ನೊಬ್ಬರ ಏಳ್ಗೆಗೆ ಕಲ್ಲು ಹಾಕುವುದರಲ್ಲಿ ಅಲ್ಲ.
Share On
80
ಅನುಮಾನ ತಪ್ಪಾಗಬಹುದು,
ಅನುಭವ ಎಂದಿಗೂ ತಪ್ಪಾಗಲ್ಲಾ.
ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆ,
ಅನುಭವ ಜೀವನದಲ್ಲಿ ನಾವು ಕಲಿತ ಪಾಠ.
Share On
81
ಅದ್ಭುತ ಬದುಕನ್ನು ಕಟ್ಟಿಕೊಳ್ಳಲು ಒಂದು ಕಡೆ
ಕಷ್ಟಗಳು ಇರಬೇಕು,
ಇನ್ನೊಂದು ಕಡೆ ನಂಬಿಕೆ ಇರಬೇಕು,
ಕಷ್ಟಗಳು ಪಾಠ ಕಲಿಸಿದರೆ
ನಂಬಿಕೆಗಳು ಶಕ್ತಿ ತುಂಬುತ್ತವೆ.
Share On
82
ಅದೃಷ್ಟವಂತ ಎಂದರೆ,
ಅವಕಾಶಗಳ ಪಡೆವವನು,
ಬುದ್ಧಿವಂತ ಎಂದರೆ,
ಅವಕಾಶ ಸೃಷ್ಟಿಸಿಕೊಳುವವನು.
Share On
83
ಒಬ್ಬ ಮನುಷ್ಯನ ಬಗ್ಗೆ ಮತ್ತೊಬ್ಬ ಮನುಷ್ಯನಿಗೆ ಜೀವನ ಪರ್ಯಂತ ನೆನಪು ಇರುವುದು ಕೇವಲ ಎರಡೇ, ಎರಡು ವಿಷಯಗಳು.
1. ಕೈಯಿಂದ ಮಾಡಿದ ಸಹಾಯ.
2. ಮಾತಿನಿಂದ ಮನಸ್ಸಿಗೆ ಮಾಡಿದ ಗಾಯ.
Share On
84
ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡಿ
ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡಿ
ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡಿ
Share On
85
ಋಣ ಇದ್ದರೆ ಬೆಟ್ಟದ ತುದಿಯಲ್ಲಿರುವ
ಹಣ್ಣು ಕೂಡ ನಮ್ಮ ಪಾಲಾಗುತ್ತದೆ,
ಋಣ ಇಲ್ಲದೆ ಹೋದರೆ ಅಂಗೈಯಲ್ಲಿರುವ
ಹಣ್ಣು ಕೂಡ ಜಾರಿ ಬಿದ್ದು ಅನ್ಯರ ಪಾಲಾಗುತ್ತೆ.
Share On
86
ಪರಿಸ್ಥಿತಿ ಕೆಟ್ಟರು
ಮನಸ್ಥಿತಿ ಕೇಡಬಾರದು
ಯಾಕೆಂದರೆ ಪರಿಸ್ಥಿತಿಯನ್ನು ಸರಿಪಡಿಸಬಹುದು ಆದರೆ ಮನಸ್ಥಿತಿಯನ್ನು ಸರಿ ಪಡಿಸಲು ತುಂಬಾನೇ ಕಷ್ಟ
ಯಾರು ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಮನಸ್ಸು ಹಾಳು ಮಾಡಿಕೊಳ್ಳಬೇಡಿ.
Share On
87
ಸಮಯ ಮತ್ತು ಸಂದರ್ಭ ಎರಡಕ್ಕೂ ಇರುವ ವ್ಯತ್ಯಾಸ ಎಂದರೆ,
ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ
ಆದರೆ ,
ಸಂದರ್ಭ ಆ ಜನರ ನಿಜ ವಾದ ಮುಖವನ್ನು ಪರಿಚಯಿಸುತ್ತದೆ.
Share On
88
ಮನಸು ಎಂಬುದು ಅತ್ಯಂತ ಫಲವತ್ತಾದ ಜಾಗ
ಅಲ್ಲಿ ನೀವು ಪ್ರೇಮ ,ದ್ವೇಷ, ಮತ್ಸರ, ಕರುಣೆ ಹೀಗೆ ಏನನ್ನೇ ಬಿತ್ತಿದರು ಸೋಂಪಾಗಿ ಬೆಳೆಯುತ್ತದೆ.
ಆದರೆ ಅಲ್ಲಿ ಏನೇ ಬೆಳೆದರೂ ನಾವೇ ತಿನ್ನಬೇಕು ಎನ್ನುವುದು ಮಾತ್ರ ಕಡ್ಡಾಯ.
Share On
89
ತೊಂದರೆ ಬಂದಾಗ ಪ್ರಾಮಾಣಿಕವಾಗಿ,
ಸಂಪತ್ತು ಬಂದಾಗ ಸರಳವಾಗಿ,
ಅಧಿಕಾರ ಬಂದಾಗ ವಿನಯದಿಂದ ಮತ್ತು
ಕೋಪ ಬಂದಾಗ ಶಾಂತವಾಗಿ ಇರುವವನೇ ಜೀವನದಲ್ಲಿ ಎತ್ತರಕ್ಕೆರುತ್ತಾನೆ.
ಕಾಲ ಬದಲಾಗಿದೆ ಅನ್ನೋದು ತಪ್ಪು,
ಕಾಲದಲ್ಲಿ ಬದುಕುವ ನಮ್ಮ ಮನಸ್ಥಿತಿಗಳು ಬದಲಾಗಿವೆ.
Share On
90
ಕಷ್ಟಗಳು ನಮಗೆ ವೇದನೆಯನ್ನು ಮಾತ್ರ ಕೊಡುತ್ತವೆ ಎಂದು
ಭಾವಿಸಬಾರದು ,
ನಾವು ಕಷ್ಟದಲ್ಲಿದ್ದಾಗ ನಿಜವಾದ ಮಿತ್ರರು ಯಾರು ,
ಹಿತಚಿಂತಕರು ಯಾರು ಎಂಬುದು ಗೊತ್ತಾಗುತ್ತದೆ .
ನಾವು ಯಾರನ್ನು ಆಪ್ತರು ಎಂದುಕೊಳ್ಳುತ್ತೇವೋ
ಅವರು ನಮ್ಮ ಕಷ್ಟದಲ್ಲಿನಿಜ ಬಣ್ಣ ತ್ತೋರುತ್ತಾರೆ.
Share On
91
ಸಂಪತ್ತಿನ ಬೆಲೆಯೇ ಬೇರೆ...
ಸಂಸ್ಕಾರದ ಬೆಲೆಯೇ ಬೇರೆ...
ವ್ಯಕ್ತಿತ್ವವನ್ನು ಬಟ್ಟೆ ಅಥವಾ ಆಭರಣಗಳ ಸಂಪತ್ತಿನಿಂದ ಅಳೆಯಲು ಹೋಗಬೇಡಿ...
ವ್ಯಕ್ತಿಗೆ ಗುಣವೇ ಸಂಪತ್ತು, ಸಂಸ್ಕಾರವೇ ಅವನ ಐಶ್ವರ್ಯ
Share On
92
ಕಾದ ಹಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೊಗುತ್ತದೆ,
ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ,
ನಾವು ಯಾರ ಸಂಗ ಮಾಡುತ್ತೇವೋ ಅದರಂತೆ ನಾವಾಗುತ್ತೇವೆ.
Share On
93
ಯಾರು ಶ್ರೇಷ್ಠರು ಅಲ್ಲ , ಕನಿಷ್ಠರು ಅಲ್ಲ
ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಶಿಷ್ಟ ಗಳಿರುತ್ತವೆ
ಯಾರನ್ನು ಯಾರಿಗೂ ಹೋಲಿಸದೆ ಎಲ್ಲರನ್ನೂ ಗೌರವಿಸೋಣ.
Share On
94
ಕೈ ಕೈ ಜೋಡಿಸು,
ಲೋಕವನ್ನು ಬದಲಾಯಿಸು
Share On
95
ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ,
ಅನಿಸಿದ್ದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ,
ತಪ್ಪುಗಳೇ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ,
ಕಣ್ಣೀರೇ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ,
ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ.
Share On
96
ಛತ್ರಿಯು ಮಳೆಯನ್ನು ನಿಲ್ಲಿಸುವುದಿಲ್ಲ
ಬದಲಿಗೆ ನಮಗೆ ಮಳೆಯಲ್ಲಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ.
ಹಾಗೆಯೇ,
ಆತ್ಮವಿಶ್ವಾಸವು ನಮಗೆ ಯಶಸ್ಸನ್ನು ಕೊಡದಿದ್ದರು ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ.
Share On
97
ತೂತು ಬಿದ್ದ ದೋಣಿಯಲ್ಲಿ ನದಿ ದಾಟುವುದು ಒಂದೇ,
ಮೋಸ ವಂಚನೆ ನಂಬಿಕೆ ಮತ್ತು ದ್ರೋಹ
ಮಾಡುವಂತಹ ಸಮಯ ಸಾಧಕರ
ಸ್ನೇಹ ಮಾಡುವದೂ ಒಂದೇ.
Share On
98
ಜಗತ್ತಿನಲ್ಲಿ ಅಗ್ಗದ ವಸ್ತುವೆಂದರೆ ಸಲಹೆ
ಒಬ್ಬರನ್ನು ಕೇಳಿದರೆ ಸಾವಿರ ಜನ ನೀಡುತ್ತಾರೆ.
ಜಗತ್ತಿನ ದುಬಾರಿ ವಸ್ತುವೆಂದರೆ ಸಹಾಯ
ಸಾವಿರ ಜನರನ್ನು ಕೇಳಿದಾಗ,
ಒಬ್ಬರು ಮಾಡುತ್ತಾರೆ.
Share On
99
ಮೂರು ಬಿಟ್ಟವರು
ಊರಿಗೆ ದೊಡ್ಡವರು
Share On
100
ಒಂದು ಸಣ್ಣ ನಗು ಸ್ನೇಹವನ್ನು ಪ್ರಾರಂಭಿಸುತ್ತದೆ.
ಒಂದು ಒಳ್ಳೆಯ ಮಾತು ದ್ವೇಷವನ್ನು ಕೊನೆಗೊಳಿಸುತ್ತದೆ.
ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ.
ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ.
Share On
101
ಸಂಪತ್ತು ಎಷ್ಟೇ ಇದ್ದರು
ಸರಳತೆ ಮಾತ್ರ ಮನುಷನಿಗೆ ಬೆಲೆ ಕೊಡುತ್ತದೆ.
ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು
ಆದರೆ ಸರಳತೆಗೆ ಬೆಲೆ ಕಟ್ಟಲಾಗುದಿಲ.
Share On
102
ಹೋಟೆಲ್ನಲ್ಲಿ ತಿನ್ಲಿಕ್ಕೆ ಹಣ ಬೇಕು
ಅಮ್ಮನ ಕೈ ತುತ್ತು ತಿನ್ನಲು ಋಣ ಬೇಕು.
Share On
103
ಓಡಿದವನಿಗೆ ಓಣಿ ಕಾಣಲಿಲ್ಲ,
ಹಾಡಿದವನಿಗೆ ಹಾದಿ ಕಾಣಲಿಲ್ಲ.
Share On
104
ಧೈರ್ಯವಿದ್ದವನಿಗೆ ದೈವವೂ
ಅನುಕೂಲ
Share On
105
ಮನೆಯೆಂಬ ಮರ ಮುರಿಯಬಾರದು,
ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
Share On
106
ಉತ್ತಮನು ಎತ್ತ ಹೋದರೂ ಶುಭವೇ
Share On
107
ಧನಾತ್ಮಕ ಮನಸ್ಸು ಎಲ್ಲದರಲ್ಲೂ ಅವಕಾಶವನ್ನು ಕಂಡುಕೊಳ್ಳುತ್ತದೆ.
ಸಕಾರಾತ್ಮಕ ಮನಸ್ಸು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತದೆ.
Share On
108
ಎತ್ತರಕ್ಕೆ ಬೇಳಿಬೇಕು ನಿಜಾ..!
ಅದಕ್ಕಾಗಿ ಮೆಟ್ಟಿಲುಗಳನ್ನು ತುಳಿಬೇಕೆ ಹೊರತು ಇನ್ನೊಬ್ಬರನ್ನು ತುಳಿದು ಅಲ್ಲ
Share On
109
ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹನ ಬಿಟ್ಟು ಹೋಗುತ್ತೆ.
ಇನ್ನು ಮನುಷ್ಯರು ಯಾವ ಲೆಕ್ಕ.
Share On
110
ನೀವು ಹೋಗತ್ತಿರುವ ದಾರಿಯಲ್ಲಿ ಯಾವುದೇ ಅಡಚಣೆಗಳು ಎದುರಾಗದಿದ್ದಲ್ಲಿ
ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಎಂದರ್ಥ
Share On
111
ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ
ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ
Share On
112
ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ
ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ
Share On
113
ಮನುಷ್ಯನು ಮುಹೂರ್ತ ಇಲ್ಲದೆ ಹುಟ್ಟುತ್ತಾನೆ ಮತ್ತು ಮುಹೂರ್ತ ಇಲ್ಲದೆ ಸಾಯುತ್ತಾನೆ.
ಆದರೂ ಕೂಡ ಜೀವನ ಪರ್ಯತ ಶುಭ ಮುಹೂರ್ತದ ಹಿಂದೆ ಓಡುತ್ತಾ ಇರುತ್ತಾನೆ.
Share On
114
ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು.
ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.
Share On
115
ಬೆಳ್ಳಗಿರೋದೆಲ್ಲ ಹಾಲಲ್ಲ,
ಹೊಳೆಯೋದೆಲ್ಲ ಚಿನ್ನ ಅಲ್ಲ.
Share On
116
ಊರೆಲ್ಲ ದೋಚಿಕೊಂಡು ಹೋದಮೇಲೆ
ಕೋಟೆ ಬಾಗಿಲು ಹಾಕಿದರಂತೆ.
Share On
117
ಹುಣಸೆ ಹುಳಿಯೆಂದು
ಅಂಬಡೆ ತಿಂದ ಹಾಗೆ
Share On
118
ಹರೆಯಕ್ಕೆ ಬಂದಾಗ
ಹಂದಿನೂ ಚಂದ
Share On
119
ತನ್ನೂರಲ್ಲಿ ರಂಗ,
ಪರೂರಲ್ಲಿ ಮಂಗ
Share On
120
ಹಗಲು ಅರಸನ ಕಾಟ
ಇರುಳು ದೆವ್ವದ ಕಾಟ
Share On
121
ಕೊಟ್ಟಿದ್ದು ತನಗೆ
ಬಚ್ಚಿಟ್ಟಿದ್ದು ಪರರಿಗೆ
Share On
122
ನಿನ್ನದಲ್ಲ ಸರ್ವ ಆಸ್ತಿ,
ಒಳ್ಳೆಯದಲ್ಲ ಗರ್ವ ಜಾಸ್ತಿ
Share On
123
ಕಣ್ಣಿಗೆ ಕಾಡಿಗೆ ಹಾಕದ ಹೆಣ್ಣು
ಸಪ್ಪಗೆ ಕಂಡಳು
Share On
124
ಉಗಮವಾಗದಿರಲಿ ಹಿಂಸೆ,
ಹೆಚ್ಚಿಗೆಯಾಗದಿರಲಿ ಆಸೆ.
Share On
125
ಚೆಲ್ಲಿಲ್ಲಿ ಮುಕ್ಕ ಎಲ್ಲಿದ್ದರೇನು
ಮಾಡಿದ ರಾಗೀಲಿ ಕಲ್ಲಿದ್ದರೇನು
Share On
126
ಚಿನ್ನದಂಥ ಮಕ್ಕಳು
ಹೆಣ್ಣಾದ್ರೇನು ಗಂಡಾದ್ರೇನು.
Share On
127
ಚಿಕ್ಕ ಮಡಿಕೆ
ಚೊಕ್ಕ ಬೋಜನ
Share On
128
ಚಾಡಿಕೋರನಿಗೆ
ಊರೆಲ್ಲ ನೆಂಟರು
Share On
129
ಚಪ್ಪರಕ್ಕೆ ಗತಿಯಿಲ್ಲದವ
ಉಪ್ಪರಿಗೆಯನಪೇಕ್ಷಿಸಿದ
Share On
130
ಉಗಿದರೆ ತುಪ್ಪ ಕೆಡುತ್ತದೆ,
ನುಂಗಿದರೆ ಗಂಟಲು ಕೆಡುತ್ತದೆ
Share On
131
ಉಂಡಿದ್ದು ಹೊಟ್ಟೆಗಾಗಿ,
ಮಾಡಿದ್ದು ಬಟ್ಟೆಗಾಗಿ.
Share On
132
ಉಂಡದ್ದು ಊಟ ಆಗಲಿಲ್ಲ,
ಕೊಂಡದ್ದು ಕೂಟ ಆಗಲಿಲ್ಲ
Share On
133
ಆಕಳು ದಾನಕ್ಕೆ ಕೊಟ್ರೆ,
ಹಲ್ಲು ಹಿಡಿದು ನೊಡಿದ್ರಂತೆ.
Share On
134
ಪುಣ್ಯ ಉಂಡು ತೀರಿತು,
ಪಾಪ ತಿಂದು ತೀರಿತು
Share On
135
ರಾಗಿ ಇದ್ರೆ ರಾಗ
ರಾಗಿ ಇಲ್ದಿದ್ರೆ ರೋಗ
Share On
136
ಮನಸ್ಸಿಲ್ಲದವಳ ಒಡನಾಟ
ಮಾತುಮಾತಿಗು ಬೇಸರ
Share On
137
ಬಾಯಲ್ಲಿ ಬೆಣ್ಣೆ
ಬಗಲಲ್ಲಿ ದೊಣ್ಣೆ.
Share On
138
ಬರೋಳನ್ನು ನೆಚ್ಚಿ
ಇರೋಳನ್ನು ಬಿಟ್ಟ
Share On
139
ಪರಿಚಿತರ ಮರೆಯಬೇಡ,
ಅಪರಿಚಿತರ ನಂಬಬೇಡ
Share On
140
ಚೆಲ್ಲಿದ ಹಾಲಿಗೆ,
ಒಡೆದ ಕನ್ನಡಿಗೆ
ಎಂದೂ ಅಳಬೇಡ.
Share On
141
ಚಿನ್ನ ತಿನ್ನಬೇಕಾದ್ರೆ
ಮೇಣದಂತಾ ಹಲ್ಲು ಬೇಕು.
Share On
142
ಚಿತ್ತಾ ಮಳೆ
ವಿಚಿತ್ರ ಬೆಳೆ!
Share On
143
ಚಿಕ್ಕ ಮೀನು
ದೊಡ್ಡ ಮೀನು
ನುಂಗಿತಂತೆ
Share On
144
ಆಗೋ ಪೂಜೆ ಆಗುತ್ತಿರಲಿ
ಊದೋ ಶಂಖ ಊದಿ ಬಿಡುವ
Share On
145
ನಮಸ್ಕಾರ ಮಾಡಲು ಹೋಗಿ
ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು